ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ದೊಡ್ಡ ಸಾಮಗ, ಕೋಳ್ಯೂರು ಪ್ರಶಸ್ತಿಗೆ ದತ್ತಿನಿಧಿ ಸ್ಥಾಪನೆ

ಲೇಖಕರು : ಉದಯವಾಣಿ
ಶುಕ್ರವಾರ, ಒಕ್ಟೋಬರ್ 24 , 2014
ಒಕ್ಟೋಬರ್ 22, 2014

ದೊಡ್ಡ ಸಾಮಗ, ಕೋಳ್ಯೂರು ಪ್ರಶಸ್ತಿಗೆ ದತ್ತಿನಿಧಿ ಸ್ಥಾಪನೆ

ಉಡುಪಿ : ಯಕ್ಷಗಾನ ಕಲಾರಂಗ ಯಕ್ಷಗಾನ ಕಲಾವಿದರಿಗೆ ಪ್ರತಿವರ್ಷ ತಲಾ 10,000ರೂ. ನಗದು ಪುರಸ್ಕಾರದ 16 ಪ್ರಶಸ್ತಿಯನ್ನು ನೀಡುತ್ತಿದ್ದು ಈ ವರ್ಷದಿಂದ ಈ ಪ್ರಶಸ್ತಿ ಗುತ್ಛಕ್ಕೆ ಇನ್ನೆರಡು ಪ್ರಶಸ್ತಿಗಳು ಸೇರಲಿವೆ. ಯಕ್ಷ ವಿದ್ವಾಂಸರಿಗೆ ನೀಡುವ 20,000 ರೂ. ಪ್ರಶಸ್ತಿ, ಸಂಘಟನೆಗೆ ಪ್ರದಾನ ಮಾಡುವ 25,000 ರೂ. ಮೊತ್ತದ 'ಶ್ರೀ ವಿಶ್ವೇಶತೀರ್ಥ' ಪ್ರಶಸ್ತಿ ಸೇರಿದಂತೆ ಸಂಸ್ಥೆಯ ಒಟ್ಟು ಪ್ರಶಸ್ತಿಗಳ ಸಂಖ್ಯೆ 20ಕ್ಕೆ ಏರಿದೆ.

ದೊಡ್ಡ ಸಾಮಗರೆಂದೇ ಖ್ಯಾತರಾದ ಮಲ್ಪೆ ಶಂಕರ ನಾರಾಯಣ ಸಾಮಗರ ಹೆಸರಿನಲ್ಲಿ ಮಲ್ಪೆಯವರೇ ಆದ ಉಡುಪಿ ಶಾಸಕ ಪ್ರಮೋದ್‌ ಮಧ್ವರಾಜ ಪ್ರಶಸ್ತಿ ನಿಧಿ ಸ್ಥಾಪಿಸಿರುತ್ತಾರೆ. ಖ್ಯಾತ ಸ್ತ್ರೀವೇಷಧಾರಿ ಡಾ| ಕೋಳ್ಯೂರು ರಾಮಚಂದ್ರ ರಾವ್‌ ಹೆಸರಿನಲ್ಲಿ ಅವರ ಮಕ್ಕಳು ಪ್ರಶಸ್ತಿ ಸ್ಥಾಪಿಸಿರುತ್ತಾರೆ.

ನ. 9ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಕ್ರಮವಾಗಿ ಬಲಿಪ ನಾರಾಯಣ ಭಾಗವತ ಮತ್ತು ಸಂಜೀವ ಬಳೆಗಾರ ಎಸ್‌. ಇವರು ಮೊದಲ ಪ್ರಶಸ್ತಿ ಪಡೆಯಲಿದ್ದಾರೆಂದು ಸಂಸ್ಥೆ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್‌ ತಿಳಿಸಿದ್ದಾರೆ.

ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ